Slide
Slide
Slide
previous arrow
next arrow

ಪತ್ರಕರ್ತನ ಪುತ್ರಿಯ ಅರ್ಥಪೂರ್ಣ ಜನ್ಮದಿನ; ಸಿಎಂ ಪರಿಹಾರ ನಿಧಿಗೆ ದೇಣಿಗೆ

300x250 AD

ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪತ್ರಕರ್ತನ ಕುಟುಂಬವೊ0ದು ಮಗಳ ಜನ್ಮ ದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ತಾಲೂಕಿನ ಪತ್ರಕರ್ತ ರಾಮಚಂದ್ರ ಕಿಣಿ ಅವರ ಪುತ್ರಿ ಪ್ರಣವಿ ಕಿಣಿ ಶುಕ್ರವಾರ 8ನೇ ವರ್ಷದ ಜನ್ಮ ದಿನವನ್ನಾಚರಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ ಮಕ್ಕಳ ಜನ್ಮದಿನವೆಂದರೆ ಬಟ್ಟೆ, ಚಾಕಲೇಟ್, ಆಟದ ಸಾಮಗ್ರಿಗಳು ಹೀಗೆ ಸಾಕಷ್ಟು ಉಡುಗೊರೆಗಳು ಬರುತ್ತವೆ. ಆದರೆ ಕಿಣಿ ಕುಟುಂಬ ಪ್ರಣವಿಯ ಜನ್ಮ ದಿನಕ್ಕೆ ಯಾವುದೇ ಉಡುಗೊರೆ ನೀಡದಂತೆ ಕಾರ್ಯಕ್ರಮದಲ್ಲಿ ಬೋರ್ಡ್ ಅಳವಡಿಸಿದ್ದಲ್ಲದೆ, ಮಗುವಿನ ಕೈಯ್ಯಾರೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯನ್ನೂ ನೀಡಿದ್ದಾರೆ.

300x250 AD

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿದ್ದು, ಈ ಸಂದರ್ಭದಲ್ಲಿ ರೈತರಿಗೆ ಪರಿಹಾರವಾಗಿ ತಲುಪಲಿ ಎಂದು ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರಿಗೆ ಪ್ರಣವಿಯ ಕೈಯಿಂದಲೇ 11,111 ರೂ.ಗಳ ಚೆಕ್ ಅನ್ನು ಹಸ್ತಾಂತರಿಸಲಾಗಿದೆ. ಸಚಿವ ವೈದ್ಯರು ಮಗುವಿಗೆ ಜನ್ಮದಿನದ ಶುಭಾಶಯ ಕೋರಿ, ಮಗುವಿನ ಪಾಲಕರ ಕಳಕಳಿಗೆ ಶ್ಲಾಘಿಸಿ ಅಭಿನಂದಿಸಿದ್ದಾರೆ. ಇದೇ ವೇಳೆ ಸಚಿವರನ್ನ ಕುಟುಂಬಸ್ಥರು ಸನ್ಮಾನಿಸಿ, ಗೌರವಿಸಿದರು.

Share This
300x250 AD
300x250 AD
300x250 AD
Back to top